ಪರಿಚಯ

ನನ್ನ ಪರಿಚಯ ಮಾಡಿಕೊಡುವೆ,
ಸಹನೆ ಇದ್ದರೆ ಕೇಳಿ.
ಕಾಲೇಜಿನಲ್ಲಿ ಕಲಿಯುತ್ತಿರುವ
ಬಡ ವಿದ್ಯಾರ್ಥಿ ನಾನು.
ಎಲೆಮರೆಯ ಕಾಯಿಯಂತೆ
ಬದುಕ ಬಯಸುವೆ ನಾನು.

ಕಾಲೇಜಲೆಲ್ಲೆಲ್ಲೂ ಎದ್ದುಕಾಣುವ,
ಚರ್ಚೆ, ಸಮಾರಂಭ, ಸಮ್ಮೇಳನಗಳಲ್ಲಿ
ಭಾಷಣ ಬಿಗಿಯುವ ವಾಗ್ಮಿ ನಾನಲ್ಲ.
ಚುನಾವಣೆಗಳಲ್ಲಿ ಗೆಲ್ಲುವ,
ನಾಟಕ, ಗಾಯನ, ಎನ್ಸೀಸಿ, ಸ್ಪೋರ್‍ಟ್ಸ್
ಎಲ್ಲೆಡೆ ಮಿಂಚುವ ಪ್ರತಿಭಾವಂತ ನಾನಲ್ಲ.

ಮಾತಿನಿಂದೆಲ್ಲರ ಮೋಡಿ ಮಾಡುವ,
ನವೀನ ಉಡುಪುಗಳಿಂದೆಲ್ಲರ ಸೆಳೆದು
ಕಂಡ ಬಣ್ಣದ ಚಿಟ್ಟೆಗಳ ಹಿಂದೆ ಓಡುವ
ನೀರಿನಂತೆ ಹಣವ ಸುರಿದು
ಜೀವನದ ಸುಖ ಜೇನ ಸವಿಯುವ
ಜವಾಬ್ದಾರಿರಹಿತನು ನಾನಲ್ಲ.

ಸದಾ ಕಾಲ ಓದಿ ರ್‍ಯಾಂಕ್‌ಗಳಿಸುವ
ಪುಸ್ತಕದ ಹುಳ ನಾನಲ್ಲದಿದ್ದರೂ
ಜವಾಬ್ದಾರಿಯನರಿತು ಓದುವೆ,
ನನ್ನ ಕೈಲಾದಷ್ಟೂ ಗುರು ಹಿರಿಯರ,
ದೀನ ದರಿದ್ರರ ಅನಾಥ ಅಸಹಾಯಕರ
ಸೇವೆಯಲ್ಲಿ ಕಾಲ ಕಳೆಯುವೆ.

ಪೂಜ್ಯ ತಂದೆ ತಾಯಿಯರ ಆರೈಕೆಯಲ್ಲಿ
ಪ್ರಚಾರ ರಹಿತ ಸರಳ ಜೀವನದಲ್ಲಿ
ಪರೋಪಕಾರ ಮಾಡುವುದರಲ್ಲಿ
ದೇವರ ಕಾಣಲು ಯತ್ನಿಸುವೆ.
ದ್ವೇಷಿಸುವವರನ್ನೂ ಪ್ರೀತಿಸುವೆ
ನಿಜ ಸ್ನೇಹಕೆ ಮಣಿದು ನ್ಯಾಯದಿ ನಡೆವೆ.
*****
೧೨-೦೪-೧೯೭೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಂಹಾಸನ ಮೀರಿದ ಸಂವೇದನೆ ನಾಲ್ವಡಿ ಕೃಷ್ಣರಾಜ ಒಡೆಯರ್
Next post ಬಾಂಧವ್ಯ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys